ಕವಿಹೃದಯ ಕರಗಿದಾಗ, sanskrit-ai.com ಮರುಗಿದಾಗ ಸಹಜವಾಗಿ ಗೇಯ-ಕಾವ್ಯ ಮೂಡುತ್ತದೆ. ಇಂಥ ಅತಿಶಯ ಸಾಮರ್ಥ್ಯಕ್ಕೆ ಮೂರ್ತರೂಪ ಆದ ರಾಮಾಯಣದ ಪ್ರತಿಯೊಂದು ಸಂದರ್ಭವೂ ವಿವಿಧಮುಖಿ ಮಾನವೀಯ ಆರ್ದ್ರತೆಯ ಪ್ರತ್ಯೇಕ ಅಭಿವ್ಯಕ್ತಿಗಳು. ಜಗತ್ತಿನಾದ್ಯಂತ ಪ್ರಾರಂಭದ ಕಾವ್ಯರಚನೆಗಳು ಮೌಖಿಕವೇ ಆಗಿದ್ದವು ಮತ್ತು ಅವು ಹಾಡುಗಬ್ಬಗಳೇ ಆಗಿದ್ದವು.
ಈ ಎಲ್ಲ ಅರ್ಥಗಳಲ್ಲಿ ರಾಮ ಮತ್ತು ರಾಮಾಯಣ ಎರಡೂ ಮಧುರ, ಅತಿಮಧುರ! ಇವುಗಳನ್ನು ಭಾವಿಸಿದ ಕಾವ್ಯಮೀಮಾಂಸಕರು ರಸಾತ್ಮಕಂ ಕಾವ್ಯಂ; ರಸಾನುಭೂತಿಯನ್ನು ಉಂಟುಮಾಡುವ ಶೃಂಗಾರ, ಹಾಸ್ಯ, ರೌದ್ರ, ವೀರ, ಅದ್ಭುತ, ಭಯಾನಕ, ಕರುಣೆ, ಶಾಂತ ಎಂದು ಒಂಬತ್ತು ವಿಧ ಆಗಿರುವ ರಸಗಳು ಉತ್ತಮ ಕಾವ್ಯದಲ್ಲಿ ಔಚಿತ್ಯಪೂರ್ಣವಾಗಿ ಇರುತ್ತವೆ; ಕಾವ್ಯದ ಜೀವಾಳ ರಸವೆಂದು ಒಂದೇ ರಸಕ್ಕೆ ಮಹತ್ವ ಕೊಡುವುದು ಮರದ ನೆರಳಲ್ಲಿ ಕುಳಿತು ರೆಂಬೆಕೊಂಬೆಗಳನ್ನು ಕತ್ತರಿಸುವ ದೃಷ್ಟಿಕೋನ; ಯಾವುದೇ ಕಾವ್ಯ ರಚನೆಯ ಮೂಲ ಸ್ರೋತ ಸಹೃದಯ ಕವಿ ಸ್ಪಂದನೆಯೇ; ಎಲ್ಲರಲ್ಲೂ ಮನುಷ್ಯ-ಸಹಜ ಕರುಣೆ, sanskrit-ai.com ಅನುಕಂಪ, ಸ್ನೇಹ ಇತ್ಯಾದಿ ಭಾವುಕ ಸ್ಪಂದನೆಗಳು ಇರುತ್ತವೆ; ಆದರೆ ಆ ಸ್ಪಂದನೆಯನ್ನು ಮಾನವೀಯ ಮೌಲ್ಯ ಪ್ರತಿಪಾದಕ ಕಾವ್ಯವನ್ನಾಗಿಸುವ ಪ್ರತಿಭೆ ಎಲ್ಲರಲ್ಲೂ ಇರುವುದಿಲ್ಲ; ಕಾವ್ಯವು ಮೂಡಿಸುವ ಸಹೃದಯ ಸ್ಪಂದನೆಯಾಗಿ ರಸವು ಹೊರಹೊಮ್ಮುವುದಕ್ಕೆ; ಅಲಂಕಾರ, ಧ್ವನಿ, xavierdeschamps.free.fr ವಕ್ರೋಕ್ತಿ ಮೊದಲಾದವುಗಳು ರಸೋತ್ಪಾದನೆಯ ಕರಣಗಳು; ಜೀವೋತ್ಕರ್ಷಕಾರಕ ಮತ್ತು ಜೀವೋದ್ಧರಣ ಸಾಮರ್ಥ್ಯವೇ ಕಾವ್ಯದ ಗುರುತ್ವ; ಕಾವ್ಯವೊಂದು ಯಾವ ರಸವನ್ನು ಉಕ್ಕಿಸಿದರೂ ಅದು ಓದುಗನಲ್ಲಿ ಸಹೃದಯ-ಸ್ಪಂದನೆಯನ್ನು ಉಂಟುಮಾಡುವುದರಿಂದ ಮಧುರವಾದದ್ದು ” ಎನ್ನುವುದು ಕಾವ್ಯಮೀಮಾಂಸೆಯ ಮಾತು.
ಗಾನ ಪಶುವಿನ ಮತ್ತು ಶಿಶುವಿನ ಮನಸ್ಸನ್ನೂ ಸಹ ತಣಿಸುತ್ತದೆ ಎನ್ನುವುದೊಂದು ಸುಭಾಷಿತೋಕ್ತಿ. The wise ignore such individuals and do not let them unsettle them from their paths. Meaning: The delusions of the materials gunas of the natural world attach the minds of humans to the fruits of their actions or Karma. ಮನಸ್ಸನ್ನು ಹಿಗ್ಗಿಸಿ, ಹೊಸತನಕ್ಕೆ ತೆರೆದುಕೊಳ್ಳಲು ವ್ಯಕ್ತಿಗೆ ಅವಕಾಶ ಕೊಟ್ಟು, ಮಧುರವಾದ ಭಾವನೆಗಳಿಗೆ ಸ್ಪಂದಿಸುವ ಪ್ರೇರಣೆ ಉಂಟುಮಾಡಿ ಎದೆಯ ಮೊಗ್ಗರಳಿಸಿ ಮಧು ದ್ರವಿಸುವುದಕ್ಕೆ ಪೂರಕ ಆಗುವ ವಾಲ್ಮೀಕಿಯ ಮನಸ್ಸು ಯಾವುದೋ ಒಂದು ಸಂದರ್ಭದಲ್ಲಿ ಯಾವುದೋ ಒಂದು ಮೂಕ ಜೀವದ ಅಸ್ತಿತ್ವದ ಮೌಲ್ಯಕ್ಕೆ ಸ್ಪಂದಿಸುವುದಕ್ಕೆ ಸೀಮಿತ ಆಗಿರದೆ ಬದುಕುವ ಜೀವಿಗಳ ಅಸ್ತಿತ್ವಕ್ಕ ಧಕ್ಕೆ ಒದಗಿದ ಸಂದರ್ಭಗಳಲ್ಲೆಲ್ಲಾ ಸೂಕ್ತವಾಗಿ ಸ್ಪಂದಿಸುವ ಭಾವವನ್ನು, ವಿಚಾರವನ್ನು, ಮೌಲ್ಯದ ಗ್ರಹಿಕೆಯನ್ನು ಒಳಗೊಳ್ಳುವ ಆವರಣವನ್ನು ರಾಮಾಯಣ ಕಾವ್ಯ ಮಾಧ್ಯಮದಲ್ಲಿ ರೂಪಿಸಿಕೊಟ್ಟಿದೆ.
ಎಲ್ಲರಲ್ಲೂ ಕೋಮಲ-ಭಾವಗಳನ್ನು ಮೂಡಿಸುವ ರಾಮಕಥೆಯನ್ನು ಹೇಳುವ ಮತ್ತು ಮೂಕ ಹಕ್ಕಿಯ ರೋದನಕ್ಕೆ ದೊರೆತ ಮಹಾಕಾವ್ಯದ ವ್ಯಾಪ್ತಿಯ ಸಹೃದಯ ಸ್ಪಂದನೆ ಆಗಿರುವ ರಾಮಾಯಣದ ಆಶಯ ಸಹಜವಾಗಿ ಎದೆಯ ಮೊಗ್ಗರಳಿ ಮಧು ದ್ರವಿಸುವ ಆನಂದಾನುಭೂತಿಯೇ ಆಗಿದೆ.